Puneeth rajkumar Ashrayadhama
ವಯೋಸಹಜ ಅನಾರೋಗ್ಯದಿಂದ ಆಹಾರ ಸೇವಿಸಲೂ ಆಗದ ಸ್ಥಿತಿಯಲ್ಲಿ ಸಿದ್ದಾಪುರದ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮದಲ್ಲಿ ಆಶ್ರಯ ಪಡೆದಿದ್ದ ಕೇರಳ ಮೂಲದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ಸುಮಾರು ನಲವತ್ತು ವರ್ಷಗಳಿಂದ ಮರದ ಮೂರ್ತಿ ಕೆತ್ತನೆ ಕಾರ್ಯನಿರ್ವಹಿಸುತ್ತಿದ್ದ ಪೊನ್ನಪ್ಪ ಎನ್ನುವ ಸುಮಾರು 70 ವರ್ಷದ ವ್ರದ್ಧ ವ್ಯಕ್ತಿಯು ನಿನ್ನೆ ರಾತ್ರಿ ನಿಧನರಾಗಿದ್ದು ಅವರ ಶವ ಸಂಸ್ಕಾರವನ್ನು ಶಿರಸಿಯ ವಿದ್ಯಾನಗರ ರುದ್ರಭೂಮಿಯಲ್ಲಿ ಆಶ್ರಮದ ಮುಖ್ಯಸ್ಥ ಹಾಗೂ ಅನಾಥ ರಕ್ಷಕ ನಾಗರಾಜ ನಾಯ್ಕ ನೆರವೇರಿಸಿದ್ದಾರೆ.
ಕೇರಳ ಮೂಲದ ಪೊನ್ನಪ್ಪ ಎನ್ನುವ ಈ ವ್ಯಕ್ತಿಯು ಕಳೆದ ಸುಮಾರು 40 ವರ್ಷಗಳಿಂದ ಕೇರಳದ ತಮ್ಮ ಕುಟುಂಬ ತೊರೆದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಮರದ ಕೆತ್ತನೆ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಮರದ ಮೂರ್ತಿಗಳನ್ನೂ ಮಾಡುವುದರಲ್ಲಿ ಪ್ರವೀಣರಾಗಿದ್ದ ಇವರು ಸಾಗರ ಹಾಗೂ ಸುತ್ತಮುತ್ತಲಿನ ಹಲವು ದೇವಸ್ಥಾನಗಳಿಗೆ ಮೂರ್ತಿ ಹಾಗೂ ಆನೆ ಇತ್ಯಾದಿ ಮೂರ್ತಿಗಳನ್ನೂ ಕೆತ್ತಿದ್ದಾರೆ ಎನ್ನಲಾಗಿದೆ.
ಇದೀಗ ವ್ರದ್ಧ ರಾಗಿದ್ದರಿಂದ ಅನಾರೋಗ್ಯಕ್ಕೆ ಒಳಗಾಗಿ ಆಹಾರ ಕೂಡ ಸೇವಿಸಲಾಗದ ಸ್ಥಿತಿಯಲ್ಲಿ ಪೊನ್ನಪ್ಪರವರು ಇರುವುದರಿಂದಾಗಿ ಸಾಗರದ ಸಾಮಾಜಿಕ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ನ ಕಾರ್ಮಿಕ ವಿಭಾಗದ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ವಿಲ್ಸನ್ ಗೊನ್ಸಾಲ್ವಿಸ್, ಬಸವರಾಜ, ಅಂಕಿತ, ರಾಜ, ವಿಲ್ಸನ್ ಡಯಾಸ್ ಹಾಗೂ ಕೆಲವರು ಈತನ ಕುಟುಂಬವನ್ನು ಹುಡುಕಲು ಪ್ರಯತ್ನಿಸಿ ಕೇರಳ-ತಮಿಳುನಾಡು ಗಡಿಯಲ್ಲಿ ಇರುವ ಆತನ ಕುಟುಂಬವನ್ನು ಕಂಡುಹಿಡಿದು ಆತನನ್ನು ಕುಟುಂಬಕ್ಕೆ ಸೇರಿಸುವ ಪ್ರಯತ್ನ ನಡೆಸಿದ್ದರು. ಆದರೆ ಪೊನ್ನಪ್ಪನ ಕುಟುಂಬದವರು ಆತನನ್ನು ಮನೆಗೆ ಸೇರಿಸಿಕೊಳ್ಳದೆ ಇದ್ದಾಗ ವಾಪಸ್ ಕರೆತಂದು ಸಾಗರದ ಪೋಲಿಸರ ಸೂಚನೆಯ ಮೇರೆಗೆ ಸಾಗರ ಪೋಲಿಸರ ಮಾರ್ಗದರ್ಶನದಲ್ಲಿ ಸಿದ್ದಾಪುರದ ಮುಗದೂರಿನಲ್ಲಿ ಇರುವ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮಕ್ಕೆ ಸೇರಿಸಿದ್ದರು.
ಆಹಾರ ಸೇವನೆ ಮಾಡಲು ಆಗದೆ ಇರುವ ಈತನಿಗೆ ಆಶ್ರಮದ ನಾಗರಾಜ ನಾಯ್ಕರು ಅನೇಕ ಬಾರಿ ಸಿದ್ದಾಪುರ ತಾಲೂಕಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮೂಗಿನಲ್ಲಿ ಪೈಪ್ ಹಾಕಿಸಿ ಪೈಪ್ ಮೂಲಕ ದ್ರವ ಆಹಾರ ನೀಡುತ್ತಿದ್ದರು. ಈತನ ಔಷಧೋಪಚಾರ, ಹಾಸಿಗೆಯ ಮೇಲೆಯೆ ಮಲ - ಮೂತ್ರ ಹೀಗೆ ಪ್ರತಿಯೊಂದು ಆರೈಕೆಯನ್ನು ಆಶ್ರಮದಲ್ಲಿ ನೀಡಲಾಗಿತ್ತು. ಆದರೆ ಕಳೆದ ರಾತ್ರಿ ಪೊನ್ನಪ್ಪ ರವರು ನಿಧನರಾಗಿದ್ದಾರೆ.
ಅವರ ಕಡೆಯವರು ಯಾರು ಕೂಡ ಶವವನ್ನು ತೆಗೆದುಕೊಂಡು ಹೋಗಲು ಒಪ್ಪದೆ ಇದ್ದದ್ದರಿಂದ ನಾಗರಾಜ ನಾಯ್ಕರು ಶಿರಸಿಯ ವಿದ್ಯಾನಗರ ರುದ್ರಭೂಮಿಯಲ್ಲಿ ಪೊನ್ನಪ್ಪರವರ ಶವದ ಅಂತ್ಯಕ್ರಿಯೆಯನ್ನು ಆತನ ಮಗನ ಸ್ಥಾನದಲ್ಲಿ ನಿಂತು ನೆರವೇರಿಸಿದ್ದಾರೆ.
ಪೊನ್ನಪ್ಪ ರವರ ರಕ್ಷಣೆಯಲ್ಲಿ ಸಹಕರಿಸಿದ ಸಾಗರದ ಸಾಮಾಜಿಕ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ನ ಕಾರ್ಮಿಕ ವಿಭಾಗದ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ವಿಲ್ಸನ್ ಗೊನ್ಸಾಲ್ವಿಸ್ ರವರಿಗೂ, ಬಸವರಾಜ, ಅಂಕಿತ, ರಾಜ, ವಿಲ್ಸನ್ ಡಯಾಸ್ ರವರಿಗೂ, ಆಶ್ರಮಕ್ಕೆ ಕಳುಹಿಸಿದ ಸಾಗರದ ಪೋಲಿಸರಿಗೂ, ಹಲವು ಬಾರಿ ಚಿಕಿತ್ಸೆ ನೀಡಿದ ಸಿದ್ದಾಪುರ ತಾಲೂಕಾ ಸರಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರಿಗೂ, ಶವ ಸಂಸ್ಕಾರಕ್ಕೆ ಸಹಕರಿಸಿದ ಶಿರಸಿ ವಿದ್ಯಾನಗರ ರುದ್ರಭೂಮಿಯ ಮುಖ್ಯಸ್ಥರಾದ ವಿ ಪಿ ಹೆಗಡೆ ವೈಶಾಲಿ ರವರಿಗೂ ಹಾಗೂ ರುದ್ರಭೂಮಿಯ ಸಿಬ್ಬಂದಿ ಗಣಪತಿ ರವರಿಗೂ ಆಶ್ರಮದ ಮುಖ್ಯಸ್ಥರಾದ ನಾಗರಾಜ ನಾಯ್ಕರು ಹ್ರದಯ ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇಂತಹ ಮಾನವೀಯ ಸೇವೆಗೆ ಸಹಾಯ ಮಾಡಲು ಆಸಕ್ತಿ ಇರುವವರು ಈ ಕೆಳಗಿನ ಖಾತೆ ಸಂಖ್ಯೆಗೆ ಸಹಾಯ ಮಾಡುವಂತೆ ವಿನಂತಿಸಿದ್ದಾರೆ.
PUNITH RAJKUMAR ASHRAYADHAMA ANATHASHRAMA SEVA SAMITI
A/C NO : 40918142470
IFSC CODE : SBIN0040131
BANK NAME : STATE BANK OF INDIA
BRANCH : SIDDAPUR
UPI ID : 9481389187@ybl
PHONE PAY : 9481389187
ಸ್ವಲ್ಪ ಮೈ ಕೈ ನೋವು ಬಂದರೆ, ಸಣ್ಣ ಸಮಸ್ಯೆ ಬಂದರೆ ಜೀವನದಲ್ಲಿ ಸೋತು ಹೋಗುವ ಜನರ ಮಧ್ಯೆ ತಮ್ಮ ಕಣ್ಣಿನ ವೈಕಲ್ಯದ ನಡುವೆಯೂ ಚಿತ್ರಕಲಾ ವಿಭಾಗದಲ್ಲಿ ತಮ್ಮನ್ನು ಗುರುತಿಸಿಕೊಂಡು ಸಾಧನೆ ಮಾಡುತ್ತಿರುವ ಸಿದ್ದಾಪುರ ತಾಲೂಕಿನ ಬಿಳಗಿಯ ರಾಘವೇಂದ್ರ ನಾಯ್ಕ ರವರಿಗೆ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮ ಕಲಾರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ರಾಘವೇಂದ್ರ ನಾಯ್ಕ ರವರು ಇದುವರೆಗೆ ಶ್ರೀ ರಾಮಕೃಷ್ಣ ವಿದ್ಯಾಲಯ ಸಾಗರ, ಶ್ರೀ ಕೃಪಾ ವಿದ್ಯಾ ಸಂಸ್ಥೆ ಸಾಗರ, ಪ್ರಸ್ತುತ ಅಥಿತಿ ಶಿಕ್ಷಕರಾಗಿ ಶ್ರೀ ರಾಧಾಕೃಷ್ಣ ಪಬ್ಲಿಕ್ ಸ್ಕೂಲ್ ಸಾಗರ ಹಾಗೂ ಶ್ರೀ ರಮಾನಂದ ಶಿಕ್ಷಣ ಸಂಸ್ಥೆ ಕತ್ರಗಾಲ ಇಲ್ಲಿ ಅಥಿತಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೂ ಪ್ರತಿ ಭಾನುವಾರ ಪುನಿತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮದಲ್ಲಿ ನಡೆಯುವ ಉಚಿತ ಚಿತ್ರ ಕಲಾ ತರಬೇತಿ ಯಲ್ಲಿ ಮಕ್ಕಳಿಗೆ ಚಿತ್ರಕಲೆ ಬೋಧನೆ ಮಾಡುತ್ತಿದ್ದಾರೆ.
ಶಾಲೆಯ ಜೊತೆಗೆ ಉದ್ಯೋಗ ಖಾತರಿ ಉದ್ಯೋಗ ಖಾತ್ರಿ ಬೋರ್ಡ, ಶಾಲೆಯ ಗೋಡೆಯ ಮೇಲೆ ಚಿತ್ರ ಬಿಡಿಸುವ ಕಾಯಕ ದಲ್ಲಿ ತೋಡಗಿಸಿ ಕೊಂಡಿದ್ದಾರೆ.
ರಾಘವೇಂದ್ರ ಎನ್. ನಾಯ್ಕ ಬಿಳಗಿ, ಸಿದ್ದಾಪುರ ಇವರು ಕಳೆದ ಹಲವು ವರ್ಷಗಳಿಂದ ಅಂಗ ವೈಕಲ್ಯದ ನಡುವೆಯೂ ಚಿತ್ರಕಲಾ ವಿಭಾಗದಲ್ಲಿ ತಮ್ಮನ್ನು ಗುರುತಿಸಿಕೊಂಡು, ತಾವು ಚಿತ್ರಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮದಲ್ಲಿ ನಡೆಯುವ ಉಚಿತ ಚಿತ್ರಕಲಾ ತರಬೇತಿ ನೀಡುವ ಕಾರ್ಯಕ್ರಮದಲ್ಲಿ ತಾವು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಸೇವೆಯನ್ನು ಗುರುತಿಸಿ ಇವರಿಗೆ ಗೌರವಪೂರ್ವಕವಾಗಿ ಪುನೀತ್ ರಾಜಕುಮಾರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಧಾಶ್ರಮ ಕಲಾರತ್ನ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಅಂಕೋಲಾ ತಾಲೂಕಿನ ಅಚವೆ ಗ್ರಾಮ ಪಂಚಾಯತ ವ್ಯಾಪ್ತಿಯ ಅಂಗಡಿಬೈಲಿನ ಬಸ್ ನಿಲ್ದಾಣದಲ್ಲಿ ಕಳೆದ ಕೆಲವು ದಿನಗಳಿಂದ ಅಂಗಡಿಬೈಲ್ ನ ಕೃಷ್ಣ ನರಸಿಂಹ ಹೆಗಡೆ ಎನ್ನುವವರು ಮುಖ ಹಾಗೂ ಕುತ್ತಿಗೆಯ ಭಾಗದಲ್ಲಿ ಕೊಳೆತು ಹೋಗಿ ಹುಳಗಳಾಗಿ ದುರ್ವಾಸನೆ ಬರುತ್ತಿದ್ದರು. ಇವರು ಮದುವೆಯಾಗದೆ ಒಂಟಿಯಾಗಿದ್ದು ಅನಾಥ ಸ್ಥಿತಿಯಲ್ಲಿ ಇದ್ದದ್ದರಿಂದ ಅಲ್ಲಿನ ಸ್ಥಳಿಯ ಮುಖಂಡರಾದ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಜಿ ಎಮ್ ಶೆಟ್ಟಿಯವರು ಶಿರಸಿಯ ಸ್ಕೋಡ್ ವೆಸ್ ಸಂಸ್ಥೆಯ ಮುಖ್ಯಸ್ಥರಾದ ವೆಂಕಟೇಶ್ ನಾಯ್ಕರವರ ಸಂಪರ್ಕಮಾಡಿ ಸಲಹೆ ಕೇಳಿದಾಗ ವೆಂಕಟೇಶ್ ನಾಯ್ಕರವರು ಜಿ ಎಮ್ ಶೆಟ್ಟಿಯವರಿಗೆ ನನ್ನ ಸಂಪರ್ಕ ನೀಡಿ ಹಾಗೂ ನನಗೂ ಕೂಡ ಈ ವಿಷಯದ ಬಗ್ಗೆ ಚರ್ಚಿಸಿದ್ದರು. ನಂತರ ಜಿ ಎಮ್ ಶೆಟ್ಟಿಯವರು ನನ್ನನ್ನು ಸಂಪರ್ಕಿಸಿ ಕ್ರಷ್ಣ ಹೆಗಡೆಯವರ ಅಸಹಾಯಕತೆಯ ಬಗ್ಗೆ ತಿಳಿಸಿ ನಮ್ಮ ಆಶ್ರಮದಲ್ಲಿ ಸೇರಿಸಿಕೊಳ್ಳುವಂತೆ ಕೋರಿಕೊಂಡರು. ಮತ್ತು ಅಚವೆ ಗ್ರಾಮ ಪಂಚಾಯತ ಅಧ್ಯಕ್ಷರಾದ ರವರು ಕೂಡ ಕ್ರಷ್ಣ ಹೆಗಡೆಯವರನ್ನು ಆಶ್ರಮಕ್ಕೆ ಸೇರಿಸುವಂತೆ ಗ್ರಾಮ ಪಂಚಾಯತ ವತಿಯಿಂದ ಕೇಳಿಕೊಂಡರು.
ನಾನು ನಮ್ಮ ಆಶ್ರಮದ ತಂಡದೊಂದಿಗೆ ಅಂಕೋಲಾ ತಾಲೂಕಿನ ಅಂಗಡಿಬೈಲ್ ಗೆ ಹೋಗಿ ಅಚವೆ ಗ್ರಾಮ ಪಂಚಾಯತ ಪಿಡಿಓ ರವರಾದ ವಿಠ್ಠಲ್ ಬಾಂದಿ ರವರು, ಪೋಲಿಸ್ ಸಿಬ್ಬಂದಿಗಳಾದ ನಾಗರಾಜ ಗೌಡ ರವರು, ಉಗ್ರಾಣಿಗಳಾದ ನಾಗರಾಜ ಹಳ್ಳೇರ್ ರವರು ಹಾಗೂ ಸ್ಥಳೀಯ ಮುಖಂಡರುಗಳಾದ ನರಸಿಂಹ ಹೆಗಡೆ, ವಿಶ್ವನಾಥ್ ಹೆಗಡೆ, ಮಂಜುನಾಥ್ ಹೆಗಡೆ, ವಿಘ್ನೇಶ್ವರ ಹೆಗಡೆ, ಗಣೇಶ್ ಹೆಗಡೆ, ವಿಷ್ಣು ಭಟ್ಟ, ಶೇಖರ್ ಹೆಗಡೆ, ಮಾರುತಿ ಪಟಗಾರ, ರವೀಂದ್ರ ಭಟ್ಟ, ನಾರಾಯಣ ಭಟ್ಟ ರವರ ಸಮಕ್ಷಮದಲ್ಲಿ ಕ್ರಷ್ಣ ಹೆಗಡೆಯವರನ್ನು ರಕ್ಷಣೆ ಮಾಡಿ ಸಿದ್ದಾಪುರಕ್ಕೆ ಕರೆದುಕೊಂಡು ಬಂದಿದ್ದೇವೆ. ಇವರ ರಕ್ಷಣೆಯ ಸಂದರ್ಭದಲ್ಲಿ ಸ್ಥಳಿಯರಾದ ಗೊವಿಂದ ಭಟ್ ಹಾಗೂ ಇತರರು ನಮ್ಮ ಸೇವೆಗೆ ಆರ್ಥಿಕ ಸಹಾಯ ನೀಡಿದರು.
ಸಿದ್ದಾಪುರ ತಾಲೂಕಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದು ಸಿದ್ಧಾಪುರ ತಾಲೂಕಾ ಸರಕಾರಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕರಾದ ಡಾ. ಲೋಕೇಶ ವೈ ಆರ್ ರವರು ಚಿಕಿತ್ಸೆ ನೀಡುತ್ತಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ವರ್ಗ ದವರು ಸಹಕರಿಸುತ್ತಿದ್ದಾರೆ. ಮುಖ ಹಾಗೂ ಕುತ್ತಿಗೆಯ ಮತ್ತು ಗಂಟಲು ಭಾಗದಲ್ಲಿ ಕೊಳೆತು ಹೋಗಿದ್ದು ದೊಡ್ಡ ದೊಡ್ಡ ಹುಳಗಳಾಗಿದೆ. ಊಟ ಮಾಡಲಾಗದ ಸ್ಥಿತಿಯಲ್ಲಿರುವ ಇವರಿಗೆ ಮೂಗಿನ ಮೂಲಕ ಪೈಪ್ ಅಳವಡಿಸಿ ದ್ರವ ರೂಪದ ಆಹಾರ ನೀಡಲಾಗುತ್ತಿದೆ. ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಿಸಿ ನಾವು ಕ್ರಷ್ಣ ಭಟ್ಟರ ಆರೈಕೆ ಮಾಡುತ್ತಿದ್ದೇವೆ. ಇವರ ರಕ್ಷಣೆಯಲ್ಲಿ ಸಹಕರಿಸಿದ, ಚಿಕಿತ್ಸೆಯಲ್ಲಿ ಹಾಗೂ ಆರೈಕೆಯಲ್ಲಿ ಸಹಕರಿಸುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು. ಇಂತಹ ಮಾನವೀಯ ಸೇವೆಗೆ ಸಹಾಯ ಮಾಡಲು ಆಸಕ್ತಿ ಇರುವವರು ಈ ಕೆಳಗಿನ ಖಾತೆ ಸಂಖ್ಯೆಗೆ ಸಹಾಯ ಮಾಡಬೇಕಾಗಿ ವಿನಂತಿ.
ಭಟ್ಕಳದಲ್ಲಿ ಹಲವು ವರ್ಷಗಳಿಂದ ಅನಾಥ ಸ್ಥಿತಿಯಲ್ಲಿ ತಿರುಗುತ್ತಿದ್ದ ಕ್ರಷ್ಣ ಮೊಗೇರ ಎನ್ನುವ ವ್ಯಕ್ತಿಯು ದಿನಾಂಕ 10-07-2024ರಂದು ಭಟ್ಕಳದ ಮುಟ್ಟಳ್ಳಿ ರೈಲ್ವೆ ನಿಲ್ದಾಣದ ಪ್ಲಾಟ್ ಪಾರ್ಮನಲ್ಲಿ ತಿರುಗಾಡುತ್ತಿರುವಾಗ ಬೆಂಗಳೂರಿನಿಂದ ಮುರುಡೇಶ್ವರದ ಕಡೆಗೆ ಬರುತ್ತಿದ್ದ ರೈಲಿನ ಅಡಿಗೆ ಆಕಸ್ಮಾತ್ತಾಗಿ ಬಿದ್ದು ಬಲಗೈ ತುಂಡಾಗಿ ಕಟ್ಟಾಗಿರುತ್ತದೆ. ತಕ್ಷಣ ಸಾರ್ವಜನಿಕರು ಇವರನ್ನು ಭಟ್ಕಳ ತಾಲೂಕಾ ಸರಕಾರಿ ಆಸ್ಪತ್ರೆಗೆ ಧಾಖಲಿಸಿ ನಂತರ ಕಾರವಾರದ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಧಾಖಲಿಸಿದ್ದರು. ಕಾರವಾರ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಈಗ ಇವರು ಸ್ವಲ್ಪ ಚೇತರಿಸಿಕೊಂಡಿದ್ದಾರೆ.
ಈತನು ಕಳೆದ ಹಲವಾರು ವರ್ಷಗಳಿಂದ ಅನಾಥ ಸ್ಥಿತಿಯಲ್ಲಿ ಇರುವುದರಿಂದಾಗಿ ಈತನನ್ನು ಆರೈಕೆ ಮಾಡುವವರು ಯಾರು ಇಲ್ಲದೆ ಇರುವುದರಿಂದ ಸಾರ್ವಜನಿಕರು ಭಟ್ಕಳ ಸಹರ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಭಟ್ಕಳ ಸಹರ ಪೋಲೀಸ್ ಠಾಣೆಯ ಪೋಲಿಸರು ಈ ಕ್ರಷ್ಣ ಮೊಗೇರ ಎನ್ನುವ ವ್ಯಕ್ತಿಯನ್ನು ಆಶ್ರಮಕ್ಕೆ ಸೇರಿಸಿಕೊಳ್ಳುವಂತೆ ಕೋರಿಕೊಂಡ ಮೇರೆಗೆ ಕ್ರಷ್ಣ ಮೊಗೇರ ಅವರನ್ನು ಅಂಬ್ಯೂಲೆನ್ಸ್ ವಾಹನದಲ್ಲಿ ಕರೆತಂದು ನಮ್ಮ ಅನಾಥಾಶ್ರಮಕ್ಕೆ ಸೇರಿಸಿಕೊಳ್ಳಲಾಯಿತು.
ಇವರ ರಕ್ಷಣೆಯಲ್ಲಿ ಸಹಕರಿಸಿದ, ಚಿಕಿತ್ಸೆಯಲ್ಲಿ ಹಾಗೂ ಆರೈಕೆಯಲ್ಲಿ ಸಹಕರಿಸುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು. ಇಂತಹ ಮಾನವೀಯ ಸೇವೆಗೆ ಸಹಾಯ ಮಾಡಲು ಆಸಕ್ತಿ ಇರುವವರು ಈ ಕೆಳಗಿನ ಖಾತೆ ಸಂಖ್ಯೆಗೆ ಸಹಾಯ ಮಾಡಬೇಕಾಗಿ ವಿನಂತಿ.